ಸುಳ್ಯ ದಸರಾ ಶೋಭ ಯಾತ್ರೆಯಲ್ಲಿ ಹಳೆಗೇಟು ಶಿವಾಜಿ ಯುವಕ ಮಂಡಲದಿಂದ ಸ್ತಬ್ಧಚಿತ್ರ

0

ಸುಳ್ಯ ದಸರಾ 2023 ರ ಶಾರದಾ ದೇವಿಯ ಶೋಭಾಯಾತ್ರೆಯ ಸಂದರ್ಭದಲ್ಲಿ ಶಿವಾಜಿ ಗೆಳೆಯರ ಬಳಗ ಹಳೆಗೇಟು ವತಿಯಿಂದ ಶ್ರೀದೇವಿ ಮಹಿಷಾಸುರ ಮರ್ದಿನಿ ಸ್ತಬ್ಧ ಚಿತ್ರದ ಮೆರವಣಿಗೆ ಉದ್ಘಾಟನೆ ಅ. 28ರಮದು ನಡೆಯಿತು.

ನಿವೃತ್ತ ಎ.ಎಸ್.ಐ ಭಾಸ್ಕರ ಅಡ್ಕಾರು, ಬೀರಮಂಗಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ ಇದರ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ನಿವೃತ್ತ ಯೋಧ ಬಾಲಚಂದ್ರ ಕೆ. ಹಳೆಗೇಟು, ಹಳೆಗೇಟು ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ಕೆ.ವಿ.ರಾಧಾಕೃಷ್ಣ ಹಳೆಗೇಟು ಭಾಗವಹಿಸಿದ್ದರು. ಶಿವಾಜಿ ಯುವವೃಂದ ಹಳೆಗೇಟು, ಸಾಂಸ್ಕೃತಿಕ ಸಂಘ ಹಳೆಗೇಟು, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ರಾಜ್ ಮುಖೇಶ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಂಜುನಾಥೇಶ್ವರ ಮಕ್ಕಳ ಕುಣಿತ ಭಜನಾ ತಂಡದ ಸುಮಾರು 60ಮಕ್ಕಳಿಂದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯಲ್ಲಿ ರಸ್ತೆಯುದ್ದಕ್ಕೂ ಆಕರ್ಷಕ ಕುಣಿತ ಭಜನೆ ನಡೆಯಿತು.