ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕಿ.ಭಾಗೀರಥಿ ಮುರುಳ್ಯ ಭೇಟಿ – ಖಾಯಂ ವೈದ್ಯರ ನೇಮಕದ ಭರವಸೆ

0

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕಿ .ಕು.ಭಾಗೀರಥಿ ಮುರುಳ್ಯ ಅ.30 ರಂದು ಭೇಟಿ ನೀಡಿದರು.
ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.


ಆಸ್ಪತ್ರೆಯಲ್ಲಿ ಖಾಯಂ ವೈದ್ಯರ ಸಮಸ್ಯೆ ಇದ್ದು ಇದನ್ನು ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದರು.
ವೈದ್ಯರ ನೇಮಕದ ಬಗ್ಗೆ ಮಂತ್ರಿಗಳಿಗೆ ತಿಳಿಸುವುದಾಗಿ ಮತ್ತು ವಿಧಾನ ಸೌಧದಲ್ಲಿಯೂ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.ಆಸ್ಪತ್ರೆಯ ಜೀಪು ಸರಿ ಇಲ್ಲದೆ ಇದ್ದು ಬೇರೆ ಜೀಪನ್ನು ಒದಗಿಸಬೇಕೆಂದು ಶಾಸಕರಿಗೆ ಮನವಿ ನೀಡಲಾಯಿತು.


ಈ ಸಂದರ್ಭದಲ್ಲಿ ಶ್ರೀನಾಥ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ,ಪಿಡಿಒ ಪ್ರವೀಣ್,ಜಯರಾಮ ಉಮಿಕ್ಕಳ,ಪ್ರೇಮಚಂದ್ರ ಬೆಳ್ಳಾರೆ, ಮುರಳಿ ತಡಗಜೆ, ದಿನೇಶ್ಚಂದ್ರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.