ವಿನಾಯಕ ಮಿತ್ರ ಬಳಗದ ವತಿಯಿಂದ ಮಿತ್ರ ಬಳಗದ ಸ್ಥಾಪಕಧ್ಯಕ್ಷ ವೆಂಕಟ್ರಮಣ ಮಾಣಿಬೆಟ್ಟ ಹಾಗೂ ಐಶ್ವರ್ಯ ಮದುವೆಗದ್ದೆಗೆ ಶ್ರದ್ಧಾಂಜಲಿ ಸಭೆ

0

ಉಬರಡ್ಕ ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಇದರ ವತಿಯಿಂದ ಮಿತ್ರ ಬಳಗದ ಸ್ಥಾಪಕಾಧ್ಯಕ್ಷ ಶ್ರೀ ವೆಂಕಟ್ರಮಣ ಮಾಣಿಬೆಟ್ಟು, ಹಾಗೂ ಸಲಹಾ ಸಮಿತಿ ಸದಸ್ಯರಾದ ಸುಬ್ರಮಣ್ಯ ಮದುವೆಗದ್ದೆ ಯವರ ಪುತ್ರಿ ಶ್ರೀಮತಿ ಐಶ್ವರ್ಯ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಅಮೈ ಮಡಿಯಾರು ಶಾಲಾ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಿತ್ರ ಬಳಗದ ಸಲಹಾ ಸಮಿತಿ ಸದಸ್ಯರಾದ ಪಿ. ಯಸ್ ಗಂಗಾಧರ್, ಹರೀಶ್ ಉಬರಡ್ಕ, ಜಯರಾಮ ಮಾಣಿಬೆಟ್ಟು, ವೆಂಕಟ್ರಮಣ ಮಾಣಿಬೆಟ್ಟು ರವರ ಸಹೋದರ ಸಲಹಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಮಾಣಿಬೆಟ್ಟು, ಮೋಹನ ಗೌಡ ಮಾಣಿಬೆಟ್ಟು, ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ, ಶಾಲಾ ಪ್ರಭಾರ ಮುಖ್ಯಗುರು ಶ್ರೀಮತಿ ರಾಮಕ್ಕ, ಮಿತ್ರ ಬಳಗದ ಸದಸ್ಯರು ಶಾಲಾ ಅಧ್ಯಾಪಕ ವೃಂದ, ಗೌರಿ ಯುವತಿ ಮಂಡಲ ಸದಸ್ಯರು ಉಪಸ್ಥಿತರಿದ್ದರು.