ಸಂಪಾಜೆಯ ಕಾರಿಗೆ ಪುತ್ತೂರು ಪರ್ಲಡ್ಕಲ್ಲಿ ಜೀಪು ಡಿಕ್ಕಿ, ವಾಹನಗಳು ಜಖಂ: ಪುತ್ತೂರು ಠಾಣೆಯಲ್ಲಿ ದೂರು ದಾಖಲು

0

ಸಂಪಾಜೆ ನಿವಾಸಿ ಮೂಸಾನ್ ಖಲೀಂ ಎಸ್ ಎಂ ಎಂಬವರ ಕಾರಿಗೆ ಪುತ್ತೂರು ಪರ್ಲಡ್ಕ ಜಂಕ್ಷನ್ ಬಳಿ ಜೀಪು ಡಿಕ್ಕಿಯಾಗಿ ಎರಡು ವಾಹನಗಳು ಜಖಂ ಗೊಂಡಿರುವ ಘಟನೆ ವರದಿಯಾಗಿದೆ.


ಈ ಘಟನೆಯ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮೂಸಾನ್ ಕಲೀಮ್ ಅ. 30 ರಂದು ಮಧ್ಯಾಹ್ನ ಆರೋಪಿ ಜೀಪು ಚಾಲಕ ಪದ್ಮನಾಭ ಎಂಬವರು, CRX 4512 ನೇ ನೋಂದಣಿ ನಂಬ್ರದ ಜೀಪನ್ನು ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್ ಎಂಬಲ್ಲಿ, ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ನಾನು ಚಲಾಯಿಸಿಕೊಂಡು ಹೋಗುತ್ತಿದ್ದ KA-53-ME-4130 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ ಕಾರಿಗೆ ಹಾನಿಯಾಗಿದೆ.
ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 147/2023 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.