ಕಸಾಪ ಸಾಹಿತ್ಯ ಸಂಭ್ರಮ- ತಾಲೂಕು ಮಟ್ಟದ ಕವಿಗೋಷ್ಠಿ- ವಿ.ಕೃ.ಗೋಕಾಕ್ ನೆನಪು

0

ಕನ್ನಡ ಭವನಕ್ಕೆ ಮಹಡಿ ನಿರ್ಮಿಸಿ : ಎಂ.ಮೀನಾಕ್ಷಿ ಗೌಡ

ಸುಳ್ಯದ ಈ ಕನ್ನಡ ಭವನ 17 ಪಿಲ್ಲರ್ ಗಳ ಮೂಲಕ ನಿರ್ಮಿಸಲ್ಪಟ್ಟಿದ್ದು ಮೂರು ಮಹಡಿ ಮಾಡಬಲ್ಲಷ್ಟು ಬಲಿಷ್ಟವಾಗಿದೆ. ಆದ್ದರಿಂದ ಈಗಿನ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಮ್ಮ ಅವಧಿಯೊಳಗೆ ಈ ಕನ್ನಡ ಭವನದ ಮೇಲ್ಗಡೆ ಸಭಾಂಗಣವನ್ನು ನಿರ್ಮಿಸಬೇಕು ಎಂದು ಕ.ಸಾ.ಪ. ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ ಹೇಳಿದರು.

ಅವರು ಇಂದು ಸುಳ್ಯದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯತಾಲೂಕು ಘಟಕದ ವತಿಯಿಂದ ಸುವಿಚಾರ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ನಡೆದ ತಾಲೂಕು ಮಟ್ಟದ ಕವಿಗೋಷ್ಟಿ ಹಾಗೂ ಜ್ಞಾನಪೀಠ ಪುರಸ್ಕೃತ ವಿ.ಕೃ.ಗೋಕಾಕ್ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ
ವಿ.ಕೃ.ಗೋಕಾಕ್ ಕುರಿತು ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ಉಪನ್ಯಾಸ ನೀಡಿದರು. ಸುವಿಚಾರ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಶ್ರೀಮತಿ ಗಿರಿಜಾ ಎಂ.ವಿ. ಉಪಸ್ಥಿತರಿದ್ದರು.


ಕವಿತೆ ಮಾತನಾಡಬೇಕು- ಕವಿ ವಾಚ್ಯವಾಗಬಾರದು: ಸಂಗೀತಾ ರವಿರಾಜ್
ನಿಮ್ಮ ಬರಹಗಳನ್ನು ತಿಳಿದವರಿಗೆ ತೋರಿಸಿ, ತಿದ್ದಿ ಇನ್ನಷ್ಟು ಉತ್ತಮಗೊಳಿಸಬೇಕು. ನೇರ ಹೇಳಿದರೆ ಗದ್ಯವಾಗುತ್ತದೆ. ರೂಪಕಗಳ ಮೂಲಕ ಅಮೂರ್ತವಾಗಿ ಹೇಳುವ ಕಲೆಯೇ ಕವಿತೆ. ಅದು ಎಲ್ಲರಿಗೂ ಅರ್ಥವಾಗಬೇಕೆಂದಿಲ್ಲ. ಅದನ್ನು ಕೇಳಿ ಆಸ್ವಾದಿಸುವುದಷ್ಟೇ ನಮ್ಮ ಕೆಲಸ. ಬರೆಯುವರು ಗುಣಮಟ್ಟ ಕಾಯ್ದುಕೊಳ್ಳಬೇಕು. ನಿರಂತರ ಅಧ್ಯಯನದಿಂದ ಮಾತ್ರ ಇದು ಸಾಧ್ಯ ಎಂದು ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ, ಸಾಹಿತಿ ಶ್ರೀ ಮತಿ ಸಂಗೀತ ರವಿರಾಜ್ ಚೆಂಬು ಹೇಳಿದರು.


ಕವಿಗಳಾದ ವಿಮಲಾರುಣ ಪಡ್ಡಂಬೈಲು, ಸಂಧ್ಯಾ ಕುಮಾರ್ ಉಬರಡ್ಕ, ವಿದ್ಯಾಶಂಕರಿ ಅಜ್ಜಾವರ, ಹೇಮಲತಾ ಗಣೇಶ್ ಕಜೆಗದ್ದೆ, ಪ್ರೇಮಾ ಮೂಲ್ಕಿ, ಅಂಕಿತಾ ಆಚಾರ್ಯ ಕಡ್ಲಾರು, ಮಮತಾ ರವೀಶ್ ಪಡ್ಡಂಬೈಲು, ಅಕ್ಷತಾ ನಾಗನಕಜೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ,ಕುಸುಮಾಕರ ಅಂಬೆಕಲ್ಲು ಚೆಂಬು, ತಿತೀಕ್ಷಾ ಎಂ.ಜೆ.ಮರಕತ,ಸಮ್ಯಕ್ತ್ ಜೈನ್ ಕಡಬ, ಅಶ್ವಿನಿ ಕೋಡಿಬೈಲು,ಪದ್ಮನಾಭ ಕೊಯನಾಡು,ಪೂರ್ಣಿಮಾ ತೋಟಪ್ಪಾಡಿ, ರಮ್ಯಾ ಅಡ್ಕಾರ್, ಉದಯಭಾಸ್ಕರ್ ಸುಳ್ಯ, ಶ್ರೀಮತಿ ಪರಮೇಶ್ವರಿ ಪ್ರಸಾದ್, ಸ್ಮಿತಾ ಕೆ.,ಅನುರಾಧ ಜನಾರ್ದನ್, ಮಮತಾ ರವೀಶ್ ಪಡ್ಡಂಬೈಲು ಕವನ ವಾಚಿಸಿದರು.

ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು,ಕಾರ್ಯಕ್ರಮ ನಿರ್ದೇಶಕಿ, ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಉಪಸ್ಥಿತರಿದ್ದರು.


ಕಾರ್ಯಕ್ರಮ ನಿರ್ದೇಶಕ ರಮೇಶ್ ನೀರಬಿದಿರೆ ಸ್ವಾಗತಿದರು.ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಂಕೀರ್ಣ ಚೊಕ್ಕಾಡಿ ವಂದಿಸಿದರು. ಕಸಾಪ ಕಾ.ಸ.ಸದಸ್ಯೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

.