ಸುಳ್ಯ: ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ಹವಾನಿಯಂತ್ರಿತ ಯಂತ್ರ ನೀಡಿದ ದಾನಿಗೆ‌ ಸನ್ಮಾನ

0

ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ಅ. 7ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಛೇರಿಗೆ ಹವಾನಿಯಂತ್ರಿತ ಯಂತ್ರವನ್ನು ಕೊಡುಗೆಯಾಗಿ ನೀಡಿದ ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಲ್ಲಿಕಾ ಸ್ಟಾಲ್ ಮಾಲಕರಾದ ತೊಡಿಕಾನ ಗ್ರಾಮದ ಬಾಳೆಕಜೆಯ ಬಾಲಕೃಷ್ಣ ಬಿ.ವಿ.ಯವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಜನಾರ್ಧನ ದೋಳ, ಉಪಾಧ್ಯಕ್ಷ ಸತ್ಯನಾರಾಯಣ ಅಚ್ರಪ್ಪಾಡಿ, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಶ್ವತ್ ಬಿಳಿಮಲೆ, ನಿರ್ದೇಶಕರಾದ ರಾಘವ ಗೌಡ ಮದುವೆಗದ್ದೆ, ಆನಂದ ಗೌಡ ಖಂಡಿಗ, ಸತೀಶ್ ಕೆ ಜಿ, ಸಚಿನ್ ಕುಮಾರ್ ಮಡಪ್ಪಾಡಿ, ಪ್ರಕಾಶ್ ಕೇರ್ಪಳ, ದೀಕ್ಷಿತ್ ಕುಮಾರ್ ಪಾನತ್ತಿಲ, ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಸಿಬ್ಬಂದಿ ಶ್ರೀಮತಿ ಲಿಖಿತಾ ಉಪಸ್ಥಿತರಿದ್ದರು.