ಸಂಪಾಜೆಯಲ್ಲಿ ಭಗವಾನ್ ಪಟಾಕಿ ಅಂಗಡಿಯವರ ಮಾದರಿ ಕಾರ್ಯ

0

ಚೆಂಬು ಗ್ರಾಮದ ಭಗವಾನ್ ಸಂಘದ ವತಿಯಿಂದ ಶ್ರೀ ಭಗವಾನ್ ಪಟಾಕಿ ಅಂಗಡಿ ತೆರೆದಿದ್ದು ಇದರಲ್ಲಿ ಬಂದ ಲಾಭಾಂಶವನ್ನು ಅಶಕ್ತರ ನೆರವಿನ ನಿಧಿಯಾಗಿ ಬಳಸಿಕೊಳ್ಳುವ ಮಾದರಿ ಕಾರ್ಯಕ್ಕೆ ಮುಂದಾಗಿದೆ.

ಈ ಸಂಘವು ಈ ಹಿಂದೆ ಅನಾಥ ಶವ ಸಂಸ್ಕಾರ, ಸಾರ್ವಜನಿಕ ಶೌಚಾಲಯ ನಿರ್ಮಾಣ, ರಸ್ತೆ ಬದಿ ಬಂಡೆ ತೆರವು, ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಮನೆ ನಿರ್ಮಾಣ, ಪ್ರಕೃತಿ ವಿಕೋಪ ಕಾರ್ಯಚರಣೆ, ಕಂಪ್ಯೂಟರ್ ತರಬೇತಿ, ಕೋವಿಡ್ ಲಸಿಕೆ ಅಭಿಯಾನ, ವಿಕಲಚೇತನರಿಗೆ ಸಹಾಯಹಸ್ತ, ದೇವಸ್ಥಾನದಲ್ಲಿ ಶ್ರಮದಾನ, ವನಮಹೋತ್ಸವ, ರಕ್ತದಾನ ಶಿಬಿರ, ಬಸ್ ತಂಗುದಾಣದ ಶುಚಿತ್ವ ಇಂತಹಾ ಹಲವಾರು ಕಾರ್ಯಕ್ರವನ್ನು ಹಮ್ಮಿಕೊಂಡಿತ್ತು.