ಸುಳ್ಯ ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘದಲ್ಲಿ ಧನಲಕ್ಷ್ಮಿ ಪೂಜೆ ಮತ್ತು ಬೀಳ್ಕೊಡುಗೆ

0

ಸುಳ್ಯದ ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮಿ ಪೂಜೆ ಮತ್ತು ಸಿಬ್ಬಂದಿಯೋರ್ವರಿಗೆ ಬೀಳ್ಕೊಡುಗೆ ಸಮಾರಂಭವು ನ.14ರಂದು ಜರುಗಿತು.


ಅರ್ಚಕ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ಧನಲಕ್ಷ್ಮಿ ಪೂಜೆ ನಡೆಯಿತು. ಈ ವೇಳೆ ಸಂಘದಲ್ಲಿ ಉದ್ಯೋಗಿಯಾಗಿದ್ದ ನವ್ಯ ಅವರಿಗೆ ಸಂಘದ ವತಿಯಿಂದ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸಲಹಾ ಸಮಿತಿಯ ಅಧ್ಯಕ್ಷ ಭಾಸ್ಕರ ರಾವ್ ಬಯಂಬು, ಪಿ. ಭಾಸ್ಕರ ರಾವ್, ಕೃಷ್ಣ ರಾವ್ ನಾವೂರು, ಡಾ. ಸದಾಶಿವ ರಾವ್, ಸುಳ್ಯ ಶಾಖೆಯ ವ್ಯವಸ್ಥಾಪಕ ಪ್ರದೀಪ್ ಆಲೆಟ್ಟಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.