ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ದೀಪಾವಳಿ ಪ್ರಯುಕ್ತ ಗೂಡುದೀಪ ಮತ್ತು ಬಲಿಯೇಂದ್ರ ಸ್ಪರ್ಧೆಯ ಫಲಿತಾಂಶ

0

ಸುಳ್ಯದ ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಗೂಡುದೀಪ ಮತ್ತು ಬಲಿಯೇಂದ್ರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಂದೇಶ್ ಕಾಯರ್ತೋಡಿ ಪಡೆದಿದ್ದು, ದ್ವಿತೀಯ ಬಹುಮಾನವು ಜೀವನ್ ಕುದ್ಪಾಜೆ ಅವರಿಗೆ ಲಭಿಸಿದೆ. ತೃತೀಯ ಬಹುಮಾನವನ್ನು ದೇವಿಪ್ರಸಾದ್ ಜೆ.ಸಿ. ಅವರು ಪಡೆದುಕೊಂಡಿದ್ದಾರೆ.

ಬಲಿಯೇಂದ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀಮತಿ ಪುಷ್ಪಾವತಿ ಆಚಾರ್ಯ, ದ್ವಿತೀಯ ಬಹುಮಾನವನ್ನು ಲಿಂಗಪ್ಪ ಗೌಡ ಕುದ್ಪಾಜೆ ಹಾಗೂ ತೃತೀಯ ಬಹುಮಾನವನ್ನು ಶ್ರೀಮತಿ ಕಮಲಾಕ್ಷಿ ಅತ್ಯಡ್ಕ ದೊಡ್ಡೇರಿ ಅವರು ಪಡೆದುಕೊಂಡಿದ್ದಾರೆ.