ಎಂ.ಬಿ.ಜಯರಾಮರಿಗೆ ಜೀವಮಾನ ಸಾಧನೆ ಪ್ರಶಸ್ತಿ

0

ಕರ್ನಾಟಕ ವಿದ್ಯುತ್ ನಿಗಮದ ಮಾಜಿ ನಿರ್ದೇಶಕರು ಹಾಗೂ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ.ಬಿ.ಜಯರಾಮ್ ಅವರಿಗೆ ಒಡಿಸ್ಸಾ ರಾಜ್ಯ ಭುವನೇಶ್ವರದ ಉತ್ಕಲ ಯೂನಿವರ್ಸಿಟಿಯು ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಿದೆ. ಸಾರ್ವಜನಿಕ ಸಂಪರ್ಕ ಹಾಗೂ ಸಂವಹನ ಕ್ಷೇತ್ರದಲ್ಲಿ 45 ವರ್ಷಗಳಿಂದ ಎಂ.ಬಿ.ಜಯರಾಮರು ಮಾಡಿದ ಶ್ರೇಷ್ಟ ಸಾಧನೆಯನ್ನು ಪರಿಗಣಿಸಿ ಈ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ 2023 ಅನ್ನು ಆ ಯುನಿವರ್ಸಿಟಿಯವರು ನೀಡುತ್ತಿದ್ದು, ನ.23 ರಂದು ಭುವನೇಶ್ವರದಲ್ಲಿ ನಡೆಯುವ ಏಳನೇ ನ್ಯಾಷನಲ್ ಮೀಡಿಯಾ ಕಾನ್ಫರೆನ್ಸ್ ನ ಸಮಾರೋಪ ಸಮಾರಂಭದಲ್ಲಿ ಒಡಿಸ್ಸಾ ಸರಕಾರದ ವಾರ್ತಾ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಂ.ಬಿ.ಜಯರಾಮರು ಸುಳ್ಯದ ಮಂಡಲ ಪ್ರಧಾನರಾಗಿದ್ದ ದಿ.ಎಂ.ಬಾಲಕೃಷ್ಣ ಗೌಡರ ಪುತ್ರ. ಬೆಂಗಳೂರಲ್ಲಿ ನೆಲೆಸಿದ್ದಾರೆ.