ಕಾಂಚೋಡು ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೌಜನ್ಯ ಸಾವಿಗೆ ನ್ಯಾಯಒದಗಿಸುವಂತೆ ದೇವರಲ್ಲಿ ಪ್ರಾರ್ಥನೆ

0

ಕಾಂಚೋಡು ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವಂತೆ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯಲ್ಲಿ ಪ್ರಾರ್ಥನೆ ನ. 20ರಂದು ನಡೆಯಿತು. ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಳ ತಾಯಿ ಹೇಮಾವತಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಬಾಳಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ. ಶೇಖರ್, ಚಿದಾನಂದ (ಅಣ್ಣಿ), ಜಯಂತ ಕಾಯಾರ, ಕಲ್ಮಡ್ಕ ಗ್ರಾ.ಪಂ. ಸದಸ್ಯ ಹರೀಶ್ ಮಾಳಪ್ಪಮಕ್ಕಿ, ಭಾಸ್ಕರ ಗೌಡ ಜೋಗಿಬೆಟ್ಟು, ಕುಂಞಣ್ಣ ರೈ, ಭವಾನಿ ಕಾಯರ, ಅನಿಲ್ ಪಾಜಪ್ಪಳ್ಳ, ವಿಶ್ವನಾಥ ಜೋಗಿಬೆಟ್ಟು, ಪರಶುರಾಮ ಇಂದ್ರಾಜೆ, ಗಣೇಶ ಜೋಗಿಬೆಟ್ಟು,ಜನಾರ್ಧನ ಕೊಳೆಂಜಿಕೋಡಿ, ಕೇಶವ ಕೊಳೆಂಜಿಕೋಡಿ ಸೇರಿದಂತೆ ಭಕ್ತಾದಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ಅನುವಂಶಿಕ ಮೊಕ್ತೇಸರರಾದ ಹೆಗ್ಗಡೆ ಪರಮೇಶ್ವರಯ್ಯ ಪ್ರಾರ್ಥನೆ ಮಾಡಿದರು.