ಕಲ್ಲುಗುಂಡಿ ಕ್ರೈಸ್ತ ಪ್ರಾರ್ಥನಾ ಮಂದಿರದ ರಸ್ತೆ ಬದಿಯ ಹುಂಡಿಯಿಂದ ಹಣ ಕಳವು

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿರುವ ಕ್ರೈಸ್ತ ಪ್ರಾರ್ಥನಾ ಮಂದಿರದ ರಸ್ತೆ ಬದಿಯಲ್ಲಿರುವ ಹುಂಡಿಯಿಂದ ಹಣ ಕಳವಾದ ಘಟನೆ ವರದಿಯಾಗಿದ್ದು, ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ.

ನ.22ರಂದು ಹುಂಡಿ ಹಣ ಕಳವಾಗಿದ್ದು, ಚೆಂಬು ಗ್ರಾಮದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೋರ್ವರು ರಸ್ತೆ ಬದಿಯ ಹುಂಡಿಯಿಂದ ಹಣ ಕಳವುಗೈದಿದ್ದು, ಕಳವುಗೈದ ವ್ಯಕ್ತಿ ಚರ್ಚ್ ಧರ್ಮಗುರುಗಳ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಕಾರಣದಿಂದ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.