ಬಿದ್ದು ಸಿಕ್ಕ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ರೋಟರಿ ಸ್ಕೂಲ್ ಸೆಕ್ಯೂರಿಟಿ ಯಾಕೂಬ್ ಸಾಹೇಬ್

0

ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಸ್ಕೂಲ್ ಮುಂಭಾಗ ಶಾಲೆಯ ಸೆಕ್ಯೂರಿಟಿ ಯಾಕೂಬ್ ಸಾಹೇಬ್‌ರವರಿಗೆ ನ.24ರಂದು ಹಣ ಬಿದ್ದು ಸಿಕ್ಕಿದ್ದು, ಇದನ್ನು ವಾರಸುದಾರರಾದ ಆಟೋ ಚಾಲಕ ಆನಂದರವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯನಿ ಹರಿಣಾಕ್ಷಿ ಕೆ. ಎಸ್ .ಯವರು ಸುದ್ದಿಗೆ ಈ ವಿಷಯ ತಿಳಿಸಿದ ಹಿನ್ನಲೆಯಲ್ಲಿ ಸುದ್ದಿ ವೆಬ್‌ಸೈಟ್‌ನಲ್ಲಿ ನ.24 ರಂದು ಹಣ ಬಿದ್ದು ಸಿಕ್ಕಿದೆ ಎಂಬ ವರದಿ ಪ್ರಕಟಗೊಂಡಿತ್ತು, ವರದಿ ನೋಡಿದ ಬಳಿಕ ಆನಂದರು ಸುದ್ದಿ ಕಛೇರಿಗೆ ಆಗಮಿಸಿ ಸರಿಯಾದ ಮಾಹಿತಿ ತಿಳಿಸಿದ್ದರು. ನ.25ರಂದು ಸ್ಕೂಲ್‌ನಿಂದ ಹಣವನ್ನು ಪಡೆದುಕೊಂಡಿದ್ದಾರೆ.