ಕನಕಮಜಲು: ಸಕ್ಸಸ್ ಸುಣ್ಣಮೂಲೆ ವತಿಯಿಂದ ಶ್ರಮದಾನ

0

ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತಲು ಹಾಗೂ ಕ್ರೀಡಾಂಗಣ ವನ್ನು ಸಕ್ಸಸ್ ಸುಣ್ಣಮೂಲೆ ಗ್ರೂಪಿನ ಸದಸ್ಯರು ಸೇರಿ ನ.26ರಂದು ಸ್ವಚ್ಛತೆ ನಡೆಸಿದರು.

ಕನಕಮಜಲಿನ ಶಾಲಾ ವಠಾರದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಮೀದ್ ಕೆ.ಎಂ. ಅವರ ನೇತೃತ್ವದಲ್ಲಿ ಸ್ವಚ್ಛತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಕ್ಸಸ್ ಸುಣ್ಣಮೂಲೆ ತಂಡದ ಅಧ್ಯಕ್ಷ ಶರೀಫ್ ಎ.ಕೆ. ಸದಸ್ಯರಾದ ಅಬೂಬಕ್ಕರ್ ಎ.ಕೆ., ರಂಶಾದ್ ಎಸ್.ಎಂ., ರಶೀದ್ ಸುಣ್ಣಮೂಲೆ, ಜಾಫರ್ ಎಸ್.ಯು., ಹುಸೈನ್ ಕೆ.ಎಂ.‌,ಜುನೈದ್ ಎ.ಕೆ. ,ಗಫೂರ್ ಸುಣ್ಣಮೂಲೆ, ಸಫವಾನ್ ಎ.ಕೆ., ಉಪಸ್ಥಿತರಿದ್ದರು.