ಕಾಯರ್ತೋಡಿ :ಸೂರ್ತಿಲ ಶ್ರೀನಿಧಿ ಮಹಿಳಾ ಮಂಡಲದ ವತಿಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

0

ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲದ ವತಿಯಿ೦ದ ಗಣ ಹೋಮ ಮತ್ತು ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ನಾಗಪಟ್ಟಣ ದೇವಸ್ಥಾನದ ಅರ್ಚಕರಾದ ದಿವಿಜೇಶ ಕೆದಿಲಾಯ ಇವರ ನೇತೃತ್ವದಲ್ಲಿ ಡಿ. 3 ರಂದು ಜರುಗಿತು.


ಈ ಒ೦ದು ಕಾರ್ಯಕ್ರಮಕ್ಕೆ ರಕ್ತೇಶ್ವರಿ ಸಮಿತಿ ಸೂರ್ತಿಲ ಇದರ ಅಧ್ಯಕ್ಷರು, ಸದಸ್ಯರು ಮತ್ತು ವಿವಿಧ ಸ೦ಘ ಸ೦ಸ್ಥೆಗಳ ಸದಸ್ಯರು ಹಾಗು ಊರಿನ ಹತ್ತು ಸಮಸ್ತರು ಮತ್ತು ಮಹಿಳಾ ಮ೦ಡಲದ ಪದಾಧಿಕಾರಿಗಳು ಸದಸ್ಯೆಯರು ಪಾಲ್ಗೊ೦ಡಿದ್ದರು.

ಶ್ರೀ ರಕೇಶ್ವರಿ ಮಹಿಳಾ ಭಜನಾ ಮ೦ಡಳಿ ಸೂರ್ತಿಲ – ಕಾಯರ್ತೋಡಿ ಇವರಿ೦ದ ಭಜನಾ ಕಾರ್ಯಕ್ರಮವು ನೆರವೇರಿತು. ಮಹಾಪೂಜೆಯ ನ೦ತರ ತೀರ್ಥಪ್ರಸಾದ ಮತ್ತು ಅನ್ನಪ್ರಸಾದವನ್ನು ವಿತರಿಸಲಾಯಿತು.