ಡಿ.9ರಂದು ಸುಳ್ಯದಲ್ಲಿ ಸರಕಾರಿ ನೌಕರರ ಸಂಘದ ಮಹಾಸಭೆ

0

ಕೆಲಸದ ಒತ್ತಡದ ನಡುವೆ ನೌಕರರ ಆರೋಗ್ಯ ‌ಕಾಳಜಿ : ಮಾಹಿತಿ‌ ಕಾರ್ಯಾಗಾರ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸುಳ್ಯ ಶಾಖೆಯ‌ ಮಹಾಸಭೆಯು ಡಿ.9 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ತಾಲೂಕು ಘಟಕದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುವುದು. ಬೆಳಗ್ಗೆ ಉದ್ಘಾಟನೆ ನಡೆಯುವುದು. ಬಳಿಕ ಕೆಲಸದ ಒತ್ತಡದ ನಡುವೆ ನೌಕರರ ಆರೋಗ್ಯ ಕಾಳಜಿ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಾಗಾರ ನಡೆಯುವುದು. ಆರೋಗ್ಯ ಇಲಾಖೆಯ ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.

ಬಳಿಕ ಮಹಾಸಭೆ ನಡೆಯಲಿದ್ದು, ನಿವೃತ್ತ ನೌಕರರಿಗೆ ಸನ್ಮಾನ ನಡೆಯುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.