ಐಶ್ವರ್ಯ ಆತ್ಮಹತ್ಯೆ ಪ್ರಕರಣ : ವಿಶೇಷ ಸರ್ಕಾರಿ ಅಭಿಯೋಜಕರಾಗಿ ಎಂ.ಎಸ್ ಶ್ಯಾಮ್ ಸುಂದರ್ ನೇಮಕ

0

ಉಬರಡ್ಕದ ಮದುವೆಗದ್ದೆ ಎಂ.ಎಸ್.ಸುಬ್ರಹ್ಮಣ್ಯ – ಉಷಾ ದಂಪತಿಯ ಪುತ್ರಿ ಶ್ರೀಮತಿ ಐಶ್ವರ್ಯ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಗೋವಿಂದರಾಜ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್ 0412 ರಲ್ಲಿ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಬೆಂಗಳೂರಿನ ಹಿರಿಯ ನ್ಯಾಯವಾದಿಯಾಗಿರುವ ಎಂ.ಎಸ್.ಶ್ಯಾಮಸುಂದರ್ ರವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸರಕಾರವು ನೇಮಿಸಿದೆ.