ನಾಪೊಕ್ಲು‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ಆಯ್ಕೆ

0

ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ನೇಮಕಗೊಂಡಿದ್ದಾರೆ.

ಪೆರಾಜೆ ವಲಯದ ಪುತ್ತ್ಯ ಪೆರಾಜೆ ಬೂತ್ ಮಟ್ಟದ ಸಭೆ ಡಿ.10ರಂದು ನಡೆಯಿತು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್ ಕೆ ಎ, ಟಿ ಪಿ ರಮೇಶ ಮಡಿಕೇರಿ,ಬೇಕಲ್ ರಮಾನಾಥ್ ಕರಿಕೆ, ಶೌಕತ್ ಅಲಿ ಕುಂಜಿಲ, ರಾಜೇಶ್ವರಿ ಕೊಯಿನಾಡು, ಚುನಾವಣಾ ಉಸ್ತುವಾರಿಯಾಗಿದ್ದ ರಮೇಶ್ ಎ ಪಿ ಬಾಳಲೇ,ವಾರ್ಡ್ ಸದಸ್ಯರಾದ ಸುರೇಶ್ ಪೇರುಮಂಡ,ಬ್ಲಾಕ್ ಕಾರ್ಯದರ್ಶಿ ಬಶೀರ್ ಚೆರಂಬಾಣೆ ವೇದಿಕೆಯಲ್ಲಿದ್ದರು. ಮನು ಪೇರುಮಂಡರನ್ನು ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದಾಗಿ ಬ್ಲಾಕ್ ಅಧ್ಯಕ್ಷರು ಘೋಷಣೆ ಮಾಡಿದರು.

ಈ ಸಂದರ್ಭ ಹರಿಪ್ರಸಾದ್,ತುಳಸಿ ಗಾಂದಿಪ್ರಸಾದ್,ಲೀಲಾವತಿ, ಬಿಂದು,ಚಿದಾನಂದ, ಪೂವಪ್ಪ ಮಾಸ್ಟರ್,ಮತ್ತು ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರುಗಳು ಸಭೆಯಲ್ಲಿ ಹಾಜರಿದ್ದು ಮುಂದಿನ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗೆ ಬೇಕಾದ ಪೂರ್ವ ತಯಾರಿ ಬಗ್ಗೆ ಕಾರ್ಯಪ್ರವರ್ತರಾಗಲು ತೀರ್ಮಾನಿಸಲಾಯಿತು. ಯುವ ವಕೀಲೆ ಚಂದನ ರವರು ಸ್ವಾಗತಿಸಿ ಜಯರಾಮ್ ವಂದಿಸಿದರು.