ಮೇನಾಲ ಭಜನಾ ಮಂದಿರದಲ್ಲಿ ಕುಣಿತ ಭಜನೆ ತರಬೇತಿ ಆರಂಭ

0

ಮೇನಾಲ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮೇನಾಲ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಕುಣಿತ ಭಜನಾ ತರಗತಿಯು ಡಿ.10ರಂದು ಪ್ರಾರಂಭಗೊಂಡಿತು.

ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ರಾಮಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪೂರ್ವಧ್ಯಕ್ಷರಾದ ಮಮತಾ ರೈ ಬೇಲೆಂತಿಮಾರು ವಹಿಸಿದ್ದರು. ಕುಣಿತ ಭಜನಾ ತರಭೆತುದಾರರದ ಅರಂಬೂರು ಭಜನಾ ಮಂದಿರದ ಸದಸ್ಯರಾದ ನಿಖಿಲ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕುಣಿತ ಭಜನೆಯ ಬಗ್ಗೆ ಮಾಹಿತಿ ನೀಡಿದರು. ವರಮಹಾಲಕ್ಷ್ಮಿ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.