ಸುಳ್ಯ,ಎಸ್‌ಡಿಪಿಐ ಸ್ಥಳೀಯ ಬ್ಲಾಕ್ ನಾಯಕರ ಮತ್ತು ಕಾರ್ಯಕರ್ತರ ಸಭೆ, ಜಿಲ್ಲಾ ನಾಯಕರು ಭಾಗಿ

0

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ವ್ಯಾಪ್ತಿಯ ನಾಯಕರ ಮತ್ತು ಕಾರ್ಯಕರ್ತರ ಸಭೆ ಸುಳ್ಯ ಗ್ರಾಂಡ್ ಪರಿವಾರ್ ಸಭಾಭವನದಲ್ಲಿ ನಡೆಯಿತು. ಪಕ್ಷದ ವಿಧಾನಸಭಾ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಪಕ್ಷವನ್ನು ಇನ್ನಷ್ಟು ತಳಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್ ರವರು ಪಕ್ಷ ಬೆಳೆದು ಬಂದ ಹಾದಿ ಹಾಗೂ ಸಿದ್ದಂತಾಗಳ ಮತ್ತು ಸುಳ್ಯದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳ ಯಾವ ರೀತಿ ಮುಂದುವರಸಬೇಕು ಮತ್ತು ಪಕ್ಷ ಸಂಘಟಿಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ‘ಜನರ ನೋವಿಗೆ ಸ್ಪಂದಿಸುವ ಪಕ್ಷ ಎಸ್ ಡಿ ಪಿ ಐ ಮಾತ್ರವಾಗಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆ ಬೇರೆ ಬೇರೆ ಕಾನೂನುಗಳನ್ನು ತಂದು ಒರೆಹಾಕುವಾಗ ಅವರ ಪರವಾಗಿ ಮಾತನಾಡುವುದು ಎಸ್‌ಡಿಪಿಐ ಪಕ್ಷ ಮಾತ್ರ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಅಬ್ದುಲ್ ರಹ್ಮಾನ್ ತಂಬಿನಮಕ್ಕಿ,ಅಬ್ದುರಹ್ಮಾನ್ ಅಡ್ಕಾರ್, ಸೆಲೀಮ್ ಗೂನಡ್ಕ ಸೇರಿದಂತೆ ಹಲವು ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

ಪಕ್ಷದ ಕಾರ್ಯಕರ್ತರುಗಳಾದ ಮೀರಜ್ ಸುಳ್ಯ ಸ್ವಾಗತಿಸಿ,ಅಬ್ದುಲ್ ರಜಾಕ್ ಪೈಚಾರ್ ವಂದಿಸಿದರು.