ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ

0

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕೋತ್ಸವ ಡಿ. 23ರಂದು ನಡೆಯಿತು. ಅಪರಾಹ್ನ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರ‌ ಅಧ್ಯಕ್ಷತೆಯಲ್ಲಿ ಸಭಾ‌ಕಾರ್ಯಕ್ರಮ ನಡೆಯಿತು.

https://youtu.be/AcRO9ia5WV8

ಕರ್ನಾಟಕ ಸರಕಾರದ ಯೂತ್ ಎನ್ ಪವರ್ ಮೆಂಟ್ & ಸ್ಪೋರ್ಟ್ಸ್ ಕಮಿಷನರ್ ಎನ್. ಶಶಿಕುಮಾರ್ ಐಪಿಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗರ ಶುಭ ಹಾರೈಸಿದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಡೀನ್ ಫೆಕಾಲ್ಟಿ ಡಾ. ಪ್ರಶಾಂತ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ನಿರ್ದೇಶಕರುಗಳಾದ ಜಗದೀಶ್ ಅಡ್ತಲೆ, ಧನಂಜಯ ಮದುವೆಗದ್ದೆ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಥಿಕ್ ಕೆ.ಎಸ್, ಕಾರ್ಯದರ್ಶಿ ಶ್ರೀಜ ರೈ, ಮಹಿಳಾ ಪ್ರತಿನಿಧಿ ಸ್ನೇಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ವಿ. ಲೀಲಾಧರ್ ಕಾಲೇಜಿನ ವರದಿ ವಾಚಿಸಿದರು. ಕಾಲೇಜು ಮ್ಯಾಗಷಿನ್ ‘ಪ್ರಜ್ಞಾ’ ವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಂಚಿಕೆಯ ಸಂಪಾದಕರಾದ ಡಾ. ಹರ್ಷವರ್ಧನ್ ಮ್ಯಾಗಜಿನ್ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್ ಕೆ.ವಿ.ಜಿ ಚಿನ್ನದಪದಕ ವಿಜೇತರ ಪಟ್ಟಿ ವಾಚಿಸಿದರು.