ಸುಳ್ಯ ಚೆನ್ನಕೇಶವ ದೇವಾಲಯದ ಬಳಿ ಹೆಚ್.ಟಿ. ವಿದ್ಯುತ್ ತಂತಿಗೆ ತಾಗಿಕೊಂಡು ಅಪಾಯದಂಚಿನಲ್ಲಿರುವ ಮರದ ಗೆಲ್ಲು

0

ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯ ಬಳಿ ವಾಲಸಿರಿಮಜಲುಗೆ ತೆರಳುವ ರಸ್ತೆಯ ಪಕ್ಕದಲ್ಲಿ ಅಶ್ವಥ ಮರದ ಗೆಲ್ಲೊಂದು ಹೆಚ್.ಟಿ. ವಿದ್ಯುತ್ ತಂತಿಗೆ ತಾಗಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.


ಇಲ್ಲಿಯೇ ಪಕ್ಕದಲ್ಲಿ ವಾಲಸಿರಿ ಮಜಲಿಗೆ ತೆರಳುವ ರಸ್ತೆಯಲ್ಲೂ ಮರದ ಗೆಲ್ಲುಗಳಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.
ಕೆಲವೇ ದಿನಗಳಲ್ಲಿ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಪ್ರಾರಂಭಗೊಳ್ಳಲಿದ್ದು, ಮೆಸ್ಕಾಂ ಇಲಾಖೆ ಇದರತ್ತ ಗಮನಹರಿಸಿ, ಮರದ ಗೆಲ್ಲು ತೆರವು ಕಾರ್ಯ ನಡೆಸಬೇಕಿದೆ.