ಅರಂತೋಡು ಎಸ್ ಕೆ ಎಸ್ ಎಸ್ ಎಫ್ ವಾರ್ಷಿಕ ಮಹಾಸಭೆ

0


ಅಧ್ಯಕ್ಷರಾಗಿ ಜಬೈರ್ ಎಸ್ ಇ ಕಾರ್ಯದರ್ಶಿಯಾಗಿ ಸಂಶುದ್ದೀನ್ ಕ್ಯೂರ್ ಆಯ್ಕೆ


ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಇದರ ವಾರ್ಷಿಕ ಮಹಾಸಭೆಯು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಸಭಾಂಗಣದಲ್ಲಿ ಡಿಸೆಂಬರ್ 22 ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಶಾಖಾಧ್ಯಕ್ಷ ಆಶಿಕ್ ರವರು ವಹಿಸಿದ್ದರು. ದುವಾವನ್ನು ಖತೀಬರಾದ ಅಲ್‌ಹಾಜ್ ಇಸಾಕ್ ಬಾಖವಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅರಂಬೂರು ಜುಮಾ ಮಸೀದಿ ಖತೀಬರಾದ ಮೊಯೀನ್‌ಪೈಝಿ ಆಗಮಿಸಿ ಸಂಘ ಸಂಸ್ತೇಗಳ ಮೂಲಕ ನಾವು ಮಾಡುವ ಸೇವೆ ಅರ್ಪಣಾಬಾವದಿಂದ ಇರಬೇಕೆಂದರು. ವೀಕ್ಷಕರಾಗಿ ಇಕ್ಬಾಲ್ ಸುಣ್ಣಮೂಲೆ ಹಾಗೂ ಶಹೀದ್ ಪಾರೆ ಭಾಗವಹಿಸಿದ್ದರು.

ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ವಿಕಾಯ ಸದಸ್ಯ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮದರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಸದರ್ ಪಕ್ರುದ್ದೀನ್ ಫೈಝಿ, ಶಾಫಿ ಮುಸ್ತಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಬೈರ್ ಎಸ್ ಇ, ಕಾರ್ಯದರ್ಶಿಯಾಗಿ ಸಂಶುದ್ದೀನ್ ಕ್ಯೂರ್, ಕೋಶಾಧಿಕಾರಿಯಾಗಿ ಅಜ್ಮಲ್ ಕುಕ್ಕುಂಬಳ, ಉಪಾಧ್ಯಕ್ಷರಾಗಿ ಹಾಜಿ ಅಜರುದ್ದೀನ್, ಝಿಯಾದ್ ಅರಂತೋಡು, ಸಂಘಟನಾ ಕಾರ್ಯದರ್ಶಿಯಾಗಿ ವಿಸ್ಬಾಹ್ ಕೆ ಎಂ, ಜತೆಕಾರ್ಯದರ್ಶಿಗಳಾಗಿ ಇಕ್ಬಾಲ್, ಅಝರುದ್ದೀನ್, ಸದಸ್ಯರುಗಳಾಗಿ ಮುಝಮ್ಮಿಲ್ ಎ ಎಂ, ಇರ್ಷಾದ್ ಕುಕ್ಕುಂಬಳ, ಅನ್ಸೀಫ್ ಅನ್ಸಾಫ್, ಸಫನ್, ಮುಜೀಬ್,ಝಯ್ನುದ್ದೀನ್ ಹಾಗೂ ಕ್ಲಷ್ಟರ್ ನಿರ್ದೇಶಕರಾಗಿ ತಾಜುದ್ದೀನ್ ಅರಂತೋಡು, ಅಮೀರ್ ಕುಕ್ಕುಂಬಳ, ಆಶಿಕ್, ಮುಝಮ್ಮಿಲ್ ಕುಕ್ಕುಂಬಳ ಆಯ್ಕೆಯಾದರು.