ಸುಳ್ಯ ತಾಲೂಕು ಸಂಜೀವಿನ ಒಕ್ಕೂಟದ ಪದಾಧಿಕಾರಿಗಳಿಂದ ರಾಜ್ಯಮಟ್ಟದ ಮುಷ್ಕರದಲ್ಲಿ ಭಾಗಿ

0

ರಾಜ್ಯಮಟ್ಟದ ಸಂಜೀವಿನಿ ಎಂ. ಬಿ. ಕೆ ಮತ್ತು ಎಲ್. ಸಿ. ಆರ್. ಫಿ. ಗಳ ಮುಷ್ಕರವು ಬೆಳಗಾವಿಯಲ್ಲಿ ಡಿ.15ರಂದು ನಡೆದಿದ್ದು, ಈ ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನ ಸಂಜೀವಿನಿ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದು, ತಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮುಷ್ಕರದಲ್ಲಿ ಭಾಗವಹಿಸಿದ ಸುಳ್ಯ ತಾಲೂಕಿನ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಡಿ.16ರಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದು, ಸುಳ್ಯ ತಾಲೂಕಿನಿಂದ 19 ಮಂದಿ ಎಂ. ಬಿ. ಕೆ., ಎಲ್. ಸಿ. ಆರ್. ಪಿ. ಗಳು ಭಾಗವಹಿಸಿದ್ದು ಸರ್ಕಾರ ಬೇಡಿಕೆ ಪೂರೈಸುವ ಭರವಸೆ ನೀಡಿರುವ ಕಾರಣ ಮುಷ್ಕರ ಹಿಂಪಡೆ ದಿರುವುದಾಗಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ತಿಳಿಸಿದ್ದಾರೆ.