ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುಂಡಿಹಿತ್ಲು, ಪ್ರತಿಷ್ಠಾ ವಾರ್ಷಿಕೋತ್ಸವ ದ ಆಮಂತ್ರಣ ಪತ್ರಿಕೆ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಇದರ ಪ್ರತಿಷ್ಠಾ ವಾರ್ಷಿಕೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.6ರಂದು ಶ್ರೀ ಹರಿಹರೇಶ್ವರ ದೇವಸ್ಥಾನ ದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಪ್ರದಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ,ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಇದರ ಅಧ್ಯಕ್ಷರಾದ ಜನಾರ್ಧನ ಗುಂಡಿಹಿತ್ಲು, ಉಪಾಧ್ಯಕ್ಷ ಶರತ್ ಭಾಗವತ್, ಜತೆ ಕಾರ್ಯದರ್ಶಿ ಸತೀಶ್ ಟಿ ಎನ್. ಸದಸ್ಯರಾದ ಶಶಿಕಲಾ ಹರಿಹರ, ಹರೀಶ್ ಯಚ್, ಹುಕ್ರಪ್ಪ ನಾಯ್ಕ,ಸುರ್ಜಿತ್‌ ಶರ್ಮ ಮತ್ತಿತರರು ಹಾಜರಿದ್ದರು.