ಚೆನ್ನಕೇಶವ ನಡುತೋಟರವರ ಶ್ರದ್ಧಾಂಜಲಿ ಕಾರ್ಯಕ್ರಮ

0
            ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಆಟೋ ಚಾಲಕ ಚೆನ್ನಕೇಶವ ನಡುತೋಟ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಅವರ ಸ್ವಗೃಹ ಬಿಳಿನೆಲೆ ಕೈಕಂಬದ ನಡುತೋಟ ಮನೆಯಲ್ಲಿ ಜ.5 ರಂದು ನಡೆಯಿತು.

ಮೃತರ ಬಗ್ಗೆ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಚೆನ್ನಕೇಶವರ ಬಾಲ್ಯ ವಿದ್ಯಾಭ್ಯಾಸ ಕಷ್ಟ ಪಟ್ಟ ಜೀವನದಬಗ್ಗೆ, ಕೃಷಿ ಚಟುವಟಿಕೆಯಲ್ಲಿ ಹೊಂದಿರುವ ಆಸಕ್ತಿ, ಕ್ರೀಡೆ ಹಾಗೂ ಕಲಾ ಸಾಂಸ್ಕೃತಿಕ ರಂಗದಲ್ಲಿ ಹೊಂದಿರುವ ಆಸಕ್ತಿ, ಹಾಗೂ ಸುಬ್ರಹ್ಮಣ್ಯದಲ್ಲಿ 40 ವರ್ಷಗಳ ಕಾಲ ಆಟೋ ಚಾಲಕರಾಗಿ ಸಲ್ಲಿಸಿದ ಸೇವೆಯ ಬಗ್ಗೆ ವಿವರವಾಗಿ ತಿಳಿಸಿ ನುಡಿ ನಮನ ಸಲ್ಲಿಸಿದರು.

ನಿವೃತ್ತ ಹಿರಿಯ ಶಿಕ್ಷಕ ಲಕ್ಷ್ಮಣಗೌಡ ನಡುತೋಟ ಚೆನ್ನಕೇಶವರ ಕುಟುಂಬದ ಬಗ್ಗೆ, ದೈವ ದೇವರುಗಳ ಪೂಜಾರಿಯಾಗಿ ಸಲ್ಲಿಸಿದ ಸೇವೆಯ ಬಗ್ಗೆ ವಿವರವಾಗಿ ತಿಳಿಸಿ ನುಡಿನಮನ ಸಲ್ಲಿಸಿದರು. ಮೋಹನ ಪಳ್ಳಿ ಗದ್ದೆ ಅವರು ಚೆನ್ನಕೇಶವ ಅವರ ಒಡನಾಟದ ಬಗ್ಗೆ ,ಕ್ರೀಡೆಗಳಲ್ಲಿ, ಯಕ್ಷಗಾನ ರಂಗದಲ್ಲಿ ಭಾಗವಹಿಸಿದ ಬಗ್ಗೆ, ಊರಿನವರೊಂದಿಗೆ ಹಾಗೂ ಪರವೂರಿನವರೊಂದಿಗೆ ನಿಕಟ ವರ್ತಿಯಾಗಿ ಇದ್ದ ಬಗ್ಗೆ ಮಾತನಾಡಿ ನುಡಿನಮನಸಲ್ಲಿಸಿದರು. ಮಂಗಳೂರು ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಪ್ರೊ. ಯು. ಬಿ .ಗುರುದೇವ್ ರವರು ಮಾತನಾಡಿ ಚೆನ್ನಕೇಶವರ ಕಷ್ಟದ ಜೀವನ ,ಸೇವೆಯ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಚೆನ್ನಕೇಶವ ರವರ ಮಗ ಮಂಗಳೂರಲ್ಲಿ ಉದ್ಯಮಿಯಾಗಿರುವ ಮಹೇಶ ನಡುತೋಟ ಅವರ ಪತ್ನಿ ಅಕ್ಷತಾ, ಪುತ್ರಿ ಶ್ರೀಮತಿ ಮಾಧವಿ ಕುಶಾಲಪ್ಪ, ಚೆನ್ನಕೇಶವರವರ ಸಹೋದರಿ ಯರು, ಕುಟುಂಬಸ್ಥರು, ಬಂಧು ಮಿತ್ರರು, ಅಭಿಮಾನಿಗಳು, ಹಾಗೂ ಊರವರು ಹಾಜರಿದ್ದರು.