ಉಬರಡ್ಕ: ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಕಮಿಲಡ್ಕ ಸಂಪರ್ಕಿಸುವ ರಸ್ತೆಯನ್ನು 3 ಲಕ್ಷ ರೂ ಉಬರಡ್ಕ ಸಹಕಾರಿ ಸಂಘದ ಎದುರಿನ ರಸ್ತೆ ಕಾಂಕ್ರೀಟಿಕರಣ ಮಾಡಲು ಗುದ್ದಲಿ ಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಜ.8 ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಉಬರಡ್ಕ ಮಿತ್ತೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ, ಗ್ರಾ.ಪಂ ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಸಂದೀಪ್ ಕುತ್ತಮೊಟ್ಟೆ, ಶ್ಯಾಮ ಪಾನತ್ತಿಲ, ಶಶಿಧರ್ ನಾಯರ್,ಜಗದೀಶ್ ಕಕ್ಕೆಬೆಟ್ಟು, ಹರಿಪ್ರಸಾದ್ ಪಾನತ್ತಿಲ, ಶಾರದಾ ಡಿ. ಶೆಟ್ಟಿ
ಅಪ್ಪಯ್ಯ ಸೂಂತೋಡು, ನಿಕೇಶ್ ಉಬರಡ್ಕ, ಪದ್ಮಯ್ಯ ನಾಯ್ಕ್, ಯತೀಂದ್ರ ಕೆದಂಬಾಡಿ, ಜಯರಾಮ ಪ್ರಭು ವಿಜಯಕುಮಾರ್ ಉಬರಡ್ಕ, ಜಗದೀಶ್ ಸರಳಿಕುಂಜ, ಸುನಿಲ್ ಕೇರ್ಪಳ,ಸೀತಾರಾಮ್ ಕುತ್ಯಾಳ, ಹೇಮಾಕುಮಾರ್ ಕೃಷ್ಣೆ ಗೌಡ
,ಜಯಪ್ರಕಾಶ್ ಉರುಂಡೆ ಮೊದಲಾದವರು ಉಪಸ್ಥಿತರಿದ್ದರು.