ಬೆಂಗಳೂರಿನ ಕೊಡಗು, ದ.ಕ. ಗೌಡ ಸಮಾಜದ ಸ್ನೇಹಮಿಲನ

0


ಶೈಕ್ಷಣಿಕ ಸಾಧನೆಗಾಗಿ ಡಾ. ಸಿಂಧು ವಸಂತ ಬೊಳ್ಕಜೆಯವರಿಗೆ ಸನ್ಮಾನ


ಕೊಡಗು ಮತ್ತು ದ.ಕ. ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಲಗ್ಗೆರೆ ಇಲ್ಲಿ ಜ. ೭ರಂದು ನಡೆದ ಸ್ನೇಹಮಿಲನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಡಾ. ಸಿಂಧು ವಸಂತ ಬೊಳ್ಕಜೆಯವರನ್ನು ಸನ್ಮಾನಿಸಲಾಯಿತು.


ಸಿಂಧು ವಸಂತರವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಬೊಳ್ಕಜೆ ಮನೆತನದ ವಿಜಯ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ವಸಂತಕುಮಾರ್ ಬೊಳ್ಕಜೆ ಹಾಗೂ ಶ್ರೀಮತಿ ಪ್ರಭಾ ದಂಪತಿಯ ಪುತ್ರಿ. ಇವರು ಬೆಂಗಳೂರಿನ ಪಿಇಎಸ್ ಯುನಿವರ್ಸಿಟಿಯಲ್ಲಿ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ರಘುನಂದನ ಗೌಡ ಮತ್ತು ಮಗ ದಕ್ಷ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಕೆ.ಎಂ.ಸುಲೋಚನಾ ಧನಂಜಯ ಅಡ್ಪಂಗಾಯ, ಪ್ರಾಂಶುಪಾಲ ದಾಮೋದರ ಕಣಜಾಲು ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಕೊಡಗು, ದ.ಕ. ಗೌಡ ಸಮಾಜ ಅಧ್ಯಕ್ಷ ಪಳಂಗಪ್ಪ ಪಾಣತ್ತಲೆ ವಹಿಸಿದ್ದರು.