ಫೆ.4 ರಂದು ಸುಬ್ರಹ್ಮಣ್ಯದಲ್ಲಿ ಕಬಡ್ಡಿ “ಅರ್ಜುನ ಟ್ರೋಫಿ”

0

ಸುಬ್ರಹ್ಮಣ್ಯದ ಡಾl ರವಿಕಕ್ಕೆಪದವು ಸಮಾಜ ಟ್ರಸ್ಟ್ ನ ಆಶ್ರಯ ದಲ್ಲಿ ಫೆ . 4 ರಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜು ಬಳಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಈ ಬಗ್ಗೆ ಸುಬ್ರಹ್ಮಣ್ಯದಲ್ಲಿ ಜ.16 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾl ರವಿಕಕ್ಕೆಪದವು ಅವರು ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅನಾಥಶ್ರಮ ಕಟ್ಟುವುದು ಮೂಲ ಉದ್ದೇಶ ಇರಿಸಲಾಗಿದ್ದು ಅದೇ ಉದ್ದೇಶದಿಂದ ಈ ಪಂದ್ಯಾಟ ಆಯೋಜಿಸಿದ್ದೇವೆ. ಇದಲ್ಲದೆ ಸುಬ್ರಹ್ಮಣ್ಯಕ್ಜೆ 24×7 ಸರ್ಕಾರಿ ಆಸ್ಪತ್ರೆಯ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದವರು ಹೇಳಿದರು.

ದಾನಿಗಳು, ಸಂಘಟನೆಯವರು, ಸಾರ್ವಜನಿಕರು ಪೂರ್ಣ ಪ್ರಮಾಣ ದ ಸಹಕಾರ ‌ನೀಡಬೇಕೆಂದು ಕೇಳಿಕೊಂಡರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಿವರಾಮ್ ಏನೆಕಲ್ಲು, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಹರೀಶ್ ಇಂಜಾಡಿ, ಮಾಜಿ.ತಾ.ಪಂ ಸದಸ್ಯರಾದ ಅಶೋಕ್ ನೆಕ್ರಾಜೆ, ಕುಮಾರಸ್ವಾಮಿ ವಿದ್ಯಾಲಯದ ಚಂದ್ರಶೇಖರ ನಾಯರ್, , ದೀಪಕ್ ನಂಬಿಯಾರ್ ಮಾತನಾಡಿದರು. ಗೋಪಾಲ ಎಣ್ಣೆಮಜಲು, ಟ್ರಸ್ಟ್ ನ ಕಾರ್ಯದರ್ಶಿ ಸುರೇಶ್ ಜಾಧವ ಉಪಸ್ಥಿತರಿದ್ದರು.