ಪಂಜ:ವಿಶ್ವಕರ್ಮ ಯೋಜನೆಯ ನೋಂದಾವಣೆ ಮತ್ತು ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಂಜ ವಲಯದ ವತಿಯಿಂದ ಪಂಜ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ನೋಂದಾವಣೆ ಕಾರ್ಯಕ್ರಮ ಮತ್ತು ಐವತ್ತೊಕ್ಲು ,ಕೇನ್ಯ ಒಕ್ಕೂಟದ ಸದಸ್ಯರಿಗೆ ಮಂಜೂರಾದ ಚೆಕ್ ವಿತರಣೆ ಕಾರ್ಯಕ್ರಮವನ್ನು
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ದಕ್ಷಿಣ ಕನ್ನಡ -2 ಜಿಲ್ಲೆಯ ನೋಡೆಲ್ ಅಧಿಕಾರಿ ಶ್ರೀರಾಮ್ ರವರು ನೀಡಿದರು.

ಕಾರ್ಯಕ್ರಮದಲ್ಲಿ ಪಂಜ ವಲಯ ಅಧ್ಯಕ್ಷ ಧರ್ಮಪಾಲ ಕಣ್ಕಲ್, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ ,ಮೇಲ್ವಿಚಾರಕಿ ಕಲಾವತಿ, ವಿ ಎಲ್ ಇ ಸರೋಜಿನಿ ಹಾಗೂ ಲಿನ್ಯಶ್ರೀ, ಸೇವಾಪ್ರತಿನಿಧಿ ರೋಹಿಣಿ, ಕಾವೇರಿ, ಭವ್ಯ, ಸುಮಿತ್ರ, ತಾರಾ ಹಾಗೂ ವಿಶ್ವಕರ್ಮ ನೋಂದಾವಣೆಯ ಫಲಾನುಭವಿಗಳು ಉಪಸ್ಥಿತರಿದ್ದರು.