ಬಂದ್ಯಡ್ಕ: ಧರ್ಮದೈವ ಶ್ರೀ ರುದ್ರಚಾಮುಂಡಿ , ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ ಹಾಗೂ ಉಪದೈವಗಳ ನೇಮೋತ್ಸವ

0

ದೇಲಂಪಾಡಿ ಗ್ರಾಮದ ಬಂದ್ಯಡ್ಕ ತರವಾಡು ಮನೆಯ ಶ್ರೀ ರುದ್ರಚಾಮುಂಡಿ ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ಹಾಗೂ ಉಪದೈವಗಳ ನೇಮೋತ್ಸವ ಜ.೨೦ ಹಾಗೂ ೨೧ ರಂದು ನಡೆಯಿತು.ಜ.೨೦ ರಂದು ಗಣಪತಿ ಹೋಮ, ಶ್ರೀ ವೆಂಕಟರಮಣ ದೇವರ ಪೂಜೆ, ದೈವಸ್ಥಾನದಲ್ಲಿ ಕೂಡುವುದು, ಗುರುಕಾರ್ನೂರಿಗೆ ಬಡಿಸುವುದು, ತೊಡಂಙಲ್, ಕುಲದೇವತೆ ಹಾಗೂ ವರ್ಣಾರ ಪಂಜುರ್ಲಿ ದೈವದ ನೇಮ, ಪೊಟ್ಟನ್ ದೈವದ ನೇಮ ನಡೆಯಿತು.

ಜ.೨೧ ರಂದು ಬೆಳಿಗ್ಗೆ ರಕ್ತೇಶ್ವರಿ ದೈವದ ನೇಮ, ಧರ್ಮದೈವ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಶ್ರೀನಿವಾಸ ಗೌಡ ಹಾಗೂ ಕುಟುಂಬಸ್ಥರು, ನೆಂಟರಿಸ್ಟರು, ಊರಿನವರು ಉಪಸ್ಥಿತರಿದ್ದರು.