ದೇವಚಳ್ಳ : ಮುಳಿಯಡ್ಕ ವಾಲ್ತಾಜೆ ರಸ್ತೆ ಕಾಂಕ್ರೀಟ್ ಕರಣಕ್ಕೆ ಗುದ್ದಲಿಪೂಜೆ

0

ದೇವಚಳ್ಳ ಗ್ರಾಮದ ಮುಳಿಯಡ್ಕ – ವಾಲ್ತಾಜೆ ರಸ್ತೆಗೆ 15 ಲಕ್ಷ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸುಳ್ಯ ಶಾಸಕಿ ಕು|ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಜ.21ರಂದು ನೆರವೇರಿಸಿದರು. ‌
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ. ಮಾಜಿ‌ ಅಧ್ಯಕ್ಷರಾದ ದಿವಾಕರ ಮುಂಡೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿನಯ ಮುಳುಗಾಡು, ಉಪಾಧ್ಯಕ್ಷ ಸಂತೋಷ್ ಜಾಕೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಗುತ್ತಿಗಾರು ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ, ಉಪಾಧ್ಯಕ್ಷ ಕಿಶೋರ್ ಅಂಬೆಕಲ್ಲು, ದೇವಚಳ್ಳ ಗ್ರಾ.ಪಂ. ಸದಸ್ಯ ಭವಾನಿಶಂಕರ ಮುಂಡೋಡಿ, ಕಂದ್ರಪ್ಪಾಡಿ ರಾಜ್ಯದೈವ ಪುರುಷ ದೈವಸ್ಥಾನದ ಅಧ್ಯಕ್ಷ ಕಾಳಿಕಾಪ್ರಸಾದ್ ಮುಂಡೋಡಿ, ಪ್ರಮುಖರಾದ ಪ್ರವೀಣ್ ಮುಂಡೋಡಿ, ಪ್ರಶಾಂತ್ ಮುಂಡೋಡಿ, ಸುಬ್ಬಪ್ಪ ಗೌಡ ಕಾಯಾರ, ವಿನೋದ್ ಕುಮಾರ್ ಮುಂಡೋಡಿ, ಊರಿ‌ನ ಫಲಾನುಭವಿಗಳು ಮತ್ತಿತರರಿದ್ದರು. ‌