ಸುನಾದ ಸಂಗೀತ ಕಲಾ ಶಾಲೆ ಸುಳ್ಯ ಶಾಖೆಯ`ಸುನಾದ ಸಂಗೀತೋತ್ಸವ-2024′

0

ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಜ.೨೮ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು. ದಿನ ಪೂರ್ತಿ ನಡೆಯುವ ಸಂಗೀತ ಸಂಭ್ರಮಕ್ಕೆ ಸಂಸ್ಥೆಯ ನಿರ್ದೇಶಕರು ಹಾಗೂ ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಎ. ಈಶ್ವರ ಭಟ್‌ರವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ವಿಜಯಶ್ರೀ ಭಟ್, ಶ್ರೀಮತಿ ವಾಣಿ ಶ್ಯಾಂಪ್ರಸಾದ್, ಮಹಾಬಲೇಶ್ವರ ಬಿರ್ಮುಕಜೆ ಮತ್ತು ರವಿರಾಜ್ ಅಡ್ಕಾರ್ ಉಪಸ್ಥಿತರಿದ್ದರು.


ಬಳಿಕ ಗುರುವಂದನೆ ನಡೆದು ನಂತರ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು.
ಸಂಜೆ ೬ರಿಂದ ವಿದ್ವಾನ್ ಕೆ.ಎಸ್.ವಿಷ್ಣುದೇವ ನಂಬೂದರಿ ಚೆನ್ನೈ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ವಾದಕರಾಗಿ ವಿದ್ವಾನ್ ಎಡಪ್ಪಳ್ಳಿ ಅಜಿತ್, ಮೃದಂಗ ವಾದಕರಾಗಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಮೋರ್ಸಿಂಗ್ ವಾದಕರಾಗಿ ವಿದ್ವಾನ್ ಪೈಯ್ಯನ್ನೂರು ಗೋವಿಂದ ಪ್ರಸಾದ್‌ರವರು ಸಹಕರಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.