ಜ. 31ರಂದು ಪ್ರಮುಖ ಅಗ್ನಿಶಾಮಕ ಪಿ.ಎಂ.ವಿಶ್ವನಾಥ ಪೆರುಮುಂಡ ನಿವೃತ್ತಿ

0

ಸುಳ್ಯ ಅಗ್ನಿಶಾಮಕ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿರುವ ಪಿ.ಎಂ.ವಿಶ್ವನಾಥ ಪೆರುಮುಂಡರವರು ಜ. 31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.


ಪೆರಾಜೆ ಗ್ರಾಮದ ಪೆರುಮುಂಡ ಮುತ್ತಪ್ಪ ಗೌಡರ ಪುತ್ರರಾಗಿರುವ ವಿಶ್ವನಾಥರು1997 ರಲ್ಲಿ ಅಗ್ನಿಶಾಮಕರಾಗಿ ಸೇವೆಗೆ ಸೇರಿದ್ದರು. ಕುಶಾಲನಗರ, ಮೈಸೂರು ಆರ್.ಬಿ.ಐ., ಮಡಿಕೇರಿ, ಸುಳ್ಯದಲ್ಲಿ ಸೇವೆ ಸಲ್ಲಿಸಿದ ಇವರಿಗೆ 2018 ರಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಮುಂಭಡ್ತಿಯಾಗಿ ಸೋಮವಾರ ಪೇಟೆಗೆ ವರ್ಗಾವಣೆಯಾಗಿತ್ತು. ಅಲ್ಲಿಂದ 2023 ಜುಲೈಯಲ್ಲಿ ಮತ್ತೆ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದಿದ್ದು, 27 ವರ್ಷಗಳ ಸೇವೆಯ ಬಳಿಕ ಇದೀಗ ನಿವೃತ್ತರಾಗುತ್ತಿದ್ದಾರೆ.


ಇವರು ಸುಳ್ಯದ ಜಟ್ಟಿಪಳ್ಳ ಕಾನತ್ತಿಲದಲ್ಲಿ ನೆಲೆಸಿದ್ದು, ಇವರ ಪತ್ನಿ ಶ್ರೀಮತಿ ಶೀಲಾರವರು ಗೃಹಿಣಿಯಾಗಿದ್ದು ಹಿರಿಯ ಪುತ್ರ ದರ್ಶನ್ ಉಡುಪಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕಿರಿಯ ಪುತ್ರ ಶಶಾಂಕ್ ಬಿಎಸ್ಸಿ ಓದುತ್ತಿದ್ದಾರೆ.