ಮೇನಾಲದಲ್ಲಿ ಡಾ.ಜಿ. ಶ್ರೀವಿದ್ಯಾ ಅಕ್ಷಯ್ ಸೋಮಯಾಗಿಯವರ ಚಿರಾಯು ಕ್ಲಿನಿಕ್ ಶುಭಾರಂಭ

0

ಅಜ್ಜಾವರ ಗ್ರಾಮದ ಮೇನಾಲದ ಅಧ್ವಿಕಾ ಕಾಂಪ್ಲೆಕ್ಸ್ ನಲ್ಲಿ ಡಾ.ಜಿ.ಶ್ರೀವಿದ್ಯಾ ಭಟ್ ರವರ ಚಿರಾಯು ಕ್ಲಿನಿಕ್ ಫೆ.23 ರಂದು ಶುಭಾರಂಭಗೊಂಡಿತು.

ಜ್ಯೋತಿಷ್ಯರಾದ ಅಶೋಕ ಸರಳಾಯ ಅಡೂರು ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಕ್ಷಯ್ ಆರ್ಕೇಡ್ ಮಾಲಕ ಎಂ.ಎನ್.ಶಿವಪ್ರಸಾದ್ ಸೋಮಯಾಗಿ,
ಶ್ರೀಗುರು ರಾಘವೇಂದ್ರ ಮಠದ ಗೌರವಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಡಾ.ದಿನೇಶ್ ರಾವ್ ಮೇನಾಲ, ಕಾಂಪ್ಲೆಕ್ಸ್ ಮಾಲಕ ಬಾಲಚಂದ್ರ ರೈ ಮೇನಾಲ,ಶಶಿಧರ ಭಟ್ ಕೇಪು, ಮಹೇಶ್ ರೈ ಮೇನಾಲ, ಗುರುಪ್ರಸಾದ್ ರೈ, ಶ್ರೀಮತಿ ವಿನಯ ಶಿವಪ್ರಸಾದ್ ಸೋಮಯಾಗಿ,
ಶ್ರೀಮತಿ ಪ್ರವೀಣ ಶ್ರೀಕೃಷ್ಣ ಸೋಮಯಾಗಿ, ಶ್ರೀಮತಿ ಸುಮಂಗಲಾ ಮೂಡಬಿದ್ರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಡಿಸೈನ್ ಫ್ಯಾಕ್ಟರಿ ಮಾಲಕ ಅಕ್ಷಯ್ ಸೋಮಯಾಗಿ ಸ್ವಾಗತಿಸಿದರು. ಡಾ.ಜಿ.ಶ್ರೀವಿದ್ಯಾ ಭಟ್ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.