ಕವಿತಾ ವೈನ್ಸ್ ಮಾಲಕ ಓ.ಎಂ.ಸುರೇಂದ್ರರಿಗೆ ಶ್ರದ್ದಾಂಜಲಿ ಸಭೆ

0

ಸುಳ್ಯದ ಖ್ಯಾತ ಉದ್ಯಮಿ, ಕೊಡುಗೈದಾನಿ, ಕವಿತಾ ವೈನ್ಸ್ ಮಾಲಕ ಓ.ಎಂ.ಸುರೇಂದ್ರರವರು ಅನಾರೋಗ್ಯದಿಂದ ಮಾ. ೧೩ರಂದು ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಸಭೆಯು ವೈನ್ಸ್ ಮರ್ಚೆಂಟ್ ಅಸೋಸಿಯೇಶನ್ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ, ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಜಟ್ಟಿಪಳ್ಳ ಯುವ ಸಂಘ, ಶಟ್ಲ್ ಬ್ಯಾಡ್ಮಿಂಟನ್ ಸಂಘ ಸುಳ್ಯ ಇದರ ವತಿಯಿಂದ ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ಇಂದು ನಡೆಯಿತು.

ಪ್ರಾಸ್ತಾವಿಕವಾಗಿ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್‌ದಾಸ್‌ರವರು ಮಾತನಾಡಿದರು. ಎಂ.ಬಿ.ಸದಾಶಿವ, ಜಯಪ್ರಕಾಶ್ ರೈ, ದಿನೇಶ್ ಮಡಪ್ಪಾಡಿಯವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವೈನ್ಸ್ ಮರ್ಚೆಂಟ್‌ನ ಪದಾಧಿಕಾರಿಗಳು, ಲಯನ್ಸ್, ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಜಟ್ಟಿಪಳ್ಳ ಯುವ ಸಂಘ, ಶಟ್ಲ್ ಬ್ಯಾಡ್ಮಿಂಟನ್ ಸಂಘ ಸುಳ್ಯ ಇದರ ಪದಾಧಿಕಾರಿಗಳು ಇದ್ದರು.