ಕಲ್ಲೇರಿ: ಗುಳಿಗನ ಕಟ್ಟೆಯಲ್ಲಿ ವಿಶೇಷ ತಂಬಿಲ ಸೇವೆ

0

ಎಣ್ಮೂರು ಗಡಿಯಲ್ಲಿರುವ ಕಲ್ಲೇರಿಯ ಗುಳಿಗನ ಕಟ್ಟೆಯಲ್ಲಿ ಮಾ.೧೪ ರಂದು ಸಂಕ್ರಮಣ ತಂಬಿಲ ಸೇವೆ ನಡೆಯಿತು. ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯ ಮುಂದಾಳತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತಂಬಿಲ ಸೇವೆ, ಪ್ರಾರ್ಥನಾ ಸಂದರ್ಭದಲ್ಲಿ ಎಣ್ಮೂರು ಆದಿ ಬೈದರುಗಳ ವಾರ್ಷಿಕ ನೇಮೋತ್ಸವವು ವಿಜೃಂಭಣೆಯಿಂದ ನಡೆಯುವ ಪ್ರಯುಕ್ತ ಯಶಸ್ವಿ ಕಾರ್ಯಕ್ರಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಆಗಮಿಸಿದ ಭಕ್ತಾದಿಗಳು ಪ್ರತಿ ಸಂಕ್ರಮಣದಂದು ಆಗಮಿಸಿ ತನ್ನ ಬೇಡಿಕೆ ಈಡೇರಿಕೆಗಾಗಿ ತಂಬಿಲ ಸೇವೆ ನಡೆಸಿ ಪ್ರಸಾದ ಸ್ವೀಕರಿಸಿರುತ್ತಾರೆ. ೨೦೨೨ ರಲ್ಲಿ ಜೀರ್ಣೋದ್ಧಾರಗೊಂಡ ಬಳಿಕ ಭಕ್ತರು ಆಗಮಿಸುತ್ತಾರೆ. ದಿನದಿಂದ ದಿನ ಭಕ್ತಾದಿಗಳು ಹೆಚ್ಚುತ್ತಲೇ ಇದ್ದಾರೆ ಎಂದು ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಹೇಳುತ್ತಾರೆ.