ಆಲೆಟ್ಟಿ ಪಂಚಾಯತ್ ವತಿಯಿಂದ ಅನಾರೋಗ್ಯ ಪೀಡಿತರಿಗೆ ಮಂಚ ಮತ್ತು ಹಾಸಿಗೆ ವಿತರಣೆ

0

ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಅನಾರೋಗ್ಯ ಪೀಡಿತ ನಾಗಪಟ್ಟಣ ಸಿ.ಆರ್.ಸಿ. ನಿವಾಸಿ ಸುಬ್ರಹ್ಮಣ್ಯ ಎಂಬವರಿಗೆ ಮರದ ಮಂಚ ಮತ್ತು ಹಾಸಿಗೆಯನ್ನು ವಿತರಿಸಲಾಯಿತು.


ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ ಯವರು ರೋಗಿಯ ಮನೆಯವರಿಗೆ ಮಂಚ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂ. ಉಪಾಧ್ಯಕ್ಷೆ ಶ್ರೀಮತಿ ಕಮಲಾ ನಾಗಪಟ್ಟಣ, ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ‌ ಮತ್ತು ಸ್ಥಳೀಯ ಗ್ರಾಮಸ್ಥರು,ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.