ಮೊಬೈಲ್ ಬ್ಯಾಟರಿ ಸಿಡಿದು ಗಾಯಗೊಂಡ ಮಗುವಿನ ಆರೋಗ್ಯ ವಿಚಾರಿಸಿದ ಬಿಜೆಪಿ ಎಸ್ಸಿ‌ ಮೋರ್ಚಾ ಪದಾಧಿಕಾರಿಗಳು

0

ಮೊಬೈಲ್‌ ಬ್ಯಾಟರಿ ಸಿಡಿದು ಹೊಟ್ಟೆಯ ಭಾಗಕ್ಕೆ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯವನ್ನು ಬಿಜೆಪಿ ಎಸ್ಸಿ‌ಮೋರ್ಚಾ ಪದಾಧಿಕಾರಿಗಳು ವಿಚಾರಿಸಿ, ಸಹಾಯಧನದ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡ ಕಜೆ ನಿವಾಸಿ ಗಣೇಶ್ ರವರ ಒಂದೂವರೆ ವರ್ಷದ ಮಗು ಸೃಜನ್ ಕೈಯಲ್ಲಿ ಮೊಬೈಲ್ ಬ್ಯಾಟರಿ ಸಿಡಿದು ಹೊಟ್ಟೆಯ ಭಾಗಕ್ಕೆ ಗಾಯವಾಗಿ ಮಂಗಳೂರಿನ ಲೇಡಿ ಘೋಷಣ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗುವಿನ ಆರೋಗ್ಯದ ಕುರಿತು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ವಿಜಯ ಆಲಡ್ಕ ಪ್ರಧಾನ ಕಾರ್ಯದರ್ಶಿ ಜಿ ಜಗನ್ನಾಥ ಜಯನಗರ ಜಿಲ್ಲಾ ಕಾರ್ಯದರ್ಶಿ ಶಂಕರ್ ಪೆರಾಜೆ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಸುಳ್ಯ ಶಾಸಕರಾ ದ ಭಾಗೀರಥಿ ಮರುಳ್ಯರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದ್ದು ಆರ್ಥಿಕ ಧನ ಸಹಾಯ ಒದಗಿಸಿಕೊಡಲು ತಿಳಿಸುವುದಾಗಿ ಮಗುವಿನ ಮನೆವರಿಗೆ ಹೇಳಿದರು