ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ಳಾರೆ ಪೇಟೆಯಲ್ಲಿ ಸಿ ಆರ್ ಪಿ ಎಫ್ ಹಾಗೂ ಪೊಲೀಸ್ ಪಥ ಸಂಚಲನ

0

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ಳಾರೆ ಪೇಟೆಯ ಮುಖ್ಯ ರಸ್ತೆಯಲ್ಲಿ ಪೊಲೀಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಇಂದು ಪಥ ಸಂಚಲನ ನಡೆಯಿತು.

ಬೆಳ್ಳಾರೆ ಪೊಲೀಸ್ ಠಾಣೆಯಿಂದ ಆರಂಭಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಸಮಾಪನ ಗೊಂಡಿತು.ಸಿ ಆರ್ ಪಿ ಎಫ್ ನ 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು,ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು,ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.


ಸಿ ಆರ್ ಪಿ ಎಫ್ ಇನ್ಸ್ಪೆಕ್ಟರ್ ಎ ಕೆ ತಿವಾರಿ,ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತ್ಯನಾರಾಯಣ,ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿ ಪಿ ಉಪಸ್ಥಿತರಿದ್ದರು.