ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಸುಳ್ಯ ಮದರ್ ತೆರೆಸಾ ಚರ್ಚ್ ಭೇಟಿ

0


ವಿಶೇಷ ಪ್ರಾರ್ಥನೆ


ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ . ಪದ್ಮರಾಜ್ ಆರ್. ಅವರು ಸುಳ್ಯ ಮದರ್ ತೆರೆಸಾ ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್‌ನ ಧರ್ಮಗುರುಗಳಾದ ಕ್ರಿಸ್ಟಿನ್ ಪುದಿಯಕುನ್ನೋಳ್‌ರವರು ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು. ಚರ್ಚ್‌ನ ಟ್ರಸ್ಟಿಗಳಾದ ಸನ್ನಿ ಮಡತ್ತಿಲ್, ಕುರಿಯಚ್ಚನ್, ಹಾಗೂ ಮಿನಿ ಜೋಸೆಫ್, ವಿಜು ಪುನೆಕ್ಕಲ್, ಸೋಜಲ್, ನ.ಪಂ. ಸದಸ್ಯ ಧೀರಾ ಕ್ರಾಸ್ತಾ, ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ಪದ್ಮರಾಜ್‌ರವರೊಂದಿಗೆ ಕಾಂಗ್ರೆಸ್ ಮುಖಂಡರುಗಳಾದ ಪಿ.ಸಿ.ಜಯರಾಮ್, ಪಿ.ಎಸ್.ಗಂಗಾಧರ್, ಮಹಮ್ಮದ್ ಕುಂಞಿ ಗೂನಡ್ಕ, ಡಾ.ಜ್ಞಾನೇಶ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜು ಪಂಡಿತ್, ಸದಾನಂದ ಮಾವಜಿ, ಎನ್. ಜಯಪ್ರಕಾಶ್ ರೈ, ನಂದರಾಜ್ ಸಂಕೇಶ, ರಂಜಿತ್ ಮೇನಾಲ, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.