ತೊಡಿಕಾನ : ಜಾತ್ರೋತ್ಸವ ಪ್ರಯುಕ್ತ ಸಂತೆ ಜಾಗ ಏಲಂ

0

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವಧಿ ಜಾತ್ರೆಯು ಎ.13 ರಿಂದ 20 ರ ತನಕ ನಡೆಯಲಿದ್ದು, ಜಾತ್ರೆ ಸಂದರ್ಭ ಸಂತೆ ಹಾಕುವವರಿಗೆ ಜಾಗದ ಏಲಂ ಎ.2 ರಂದು ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಕೆ. ಕೆ. ನಾರಾಯಣ ಏಲಂ ಪ್ರಕ್ರಿಯೆ ನಡೆಸಿಕೊಟ್ಟರು. ದೇವಸ್ಥಾನದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ, ಜೀರ್ಣೋದ್ದಾರ ಸಮಿತಿ ಸದಸ್ಯ ರವೀಂದ್ರ ಜಿ ಪಂಜಿಕೋಡಿ, ಜನಾರ್ಧನ ಬಾಳೆಕಜೆ, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಅಂಗಡಿ ಮಾಲಕರು ಉಪಸ್ಥಿತರಿದ್ದರು.