ಅರಂತೋಡು: ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾ ಅವರಿಗೆ ಸನ್ಮಾನ

0

ಅರಂತೋಡು ಗ್ರಾಮದ ಬಾಜಿನಡ್ಕ
ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಸೇವಾ ಸಮಿತಿಯ ಆಶ್ರಯದಲ್ಲಿ 2023-24 ಸಾಲಿ‌ನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ಕು.ವಿದ್ಯಾ.ಬಿ.ಬಾಜಿನಡ್ಕ ಅವರಿಗೆ ಸನ್ಮಾನ ಕಾರ್ಯಕ್ರಮವು ಮೇ.12ರಂದು ನಡೆಯಿತು.

ಟ್ರಸ್ಟ್ ನ ಅಧ್ಯಕ್ಷರಾದ ಎ.ಮನ್ಸ ಮುಗೇರ ಅಡ್ಕಬಳೆ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸಿ.ಆರ್.ಪಿ. ಕೇಶವ ಮಾಸ್ತರ್ ಹೊಸಗದ್ದೆ, ಟ್ರಸ್ಟ್ ಗೌರವಾಧ್ಯಕ್ಷ ಶಂಕರ್ ನಾರಾಯಣ ಕಟ್ಟಕೋಡಿ, ಸೇವಾ ಸಮಿತಿ ಅಧ್ಯಕ್ಷ ವಸಂತ.ಬಿ.ಬಾಜಿನಡ್ಕ, ತೊಡಿಕಾನ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಸುಂದರ.ಬಿ ಬಾಜಿನಡ್ಕ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತೀರ್ಥರಾಮ ಅಡ್ಕಬಳೆ , ಪಾಂಚಜನ್ಯ ಪಬ್ಲಿಕ್ ಸ್ಕೂಲ್ ಕೆ.ಆರ್.ಪೇಟೆ ಶಿಕ್ಷಕಿ ಭವ್ಯ. ಬಿ.ಬಾಜಿನಡ್ಕ ಸೇರಿದಂತೆ ಊರಿನ ಹಿರಿಯರು,ಗಣ್ಯರು ,ಉಪಸ್ಥಿತರಿದ್ದರು.
ಚಿದಾನಂದ ಕಟ್ಟಕೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕುಸುಮಾಧರ. ಬಿ.ಬಾಜಿನಡ್ಕ, ಕೋಶಾಧಿಕಾರಿ ಮೋಹನ್ ಕುಮಾರ್, ಶಂಕರ್ ಬಾಜಿನಡ್ಕ, ಚರಣ್ ಸುಳ್ಳಿ ಕಾರ್ಯಕ್ರಮ ನಿರೂಪಿಸಿದರು.