ಬೆಳ್ಳಾರೆಯ ಲಕ್ಷ್ಮೀಕಾಂತ ಹೆಗ್ಡೆಯವರಿಗೆ ಶ್ರದ್ಧಾಂಜಲಿ,ವೈಕುಂಠ ಸಮಾರಾಧನೆ

0

ಬೆಳ್ಳಾರೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಬೆಳ್ಳಾರೆ ತಡಗಜೆ ನಿವಾಸಿ , ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷ ಲಕ್ಷ್ಮೀಕಾಂತ ಹೆಗ್ಡೆಯವರು ಮೇ.09 ರಂದು ಹೃದಯಾಘಾತದಿಂದ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಮೇ.21 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಬಿ.ನಾರಾಯಣ ಹೆಗ್ಡೆ ಮತ್ತು ಪ್ರಸಾದ್ ಸೇವಿತರವರು ದಿ.ಲಕ್ಷ್ಮೀಕಾಂತ ಹೆಗ್ಡೆಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ಲಕ್ಷ್ಮೀಕಾಂತ ಹೆಗ್ಡೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಲೋಕೇಶ ಹೆಗ್ಡೆ ಪುತ್ತೂರು ನಿರೂಪಿಸಿದರು.
ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ವೀಣಾ ,ಪುತ್ರ ಜಿಷ್ಣು, ಪುತ್ರಿ ವಷ್ಯ ತಂದೆ ಕೇಶವ ಹೆಗ್ಡೆ, ತಾಯಿ ಜಯಲಕ್ಷ್ಮೀ ,ಸಹೋದರ,ಸಹೋದರಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.