ಬೊಳುಬೈಲು ನವಚೇತನ ಯುವಕ ಮಂಡಲ ವತಿಯಿಂದ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ನ ಮನೆ ಹಸ್ತಾಂತರ ಯೋಜನೆಗೆ ಧನ ಸಹಾಯ ಹಸ್ತಾಂತರ

0

ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ (ರಿ.) ಸುಳ್ಯ ಹಾಗೂ ಗ್ರಾಮ ಪಂಚಾಯತ್ ಜಾಲ್ಸೂರು ನಿರ್ಮಿಸಿದ ಸೋದರಿಗೊಂದು ಸೂರು “ಸೇವಾಂಜಲಿ” ಮನೆ ಹಸ್ತಾಂತರ ಕಾರ್ಯಕ್ರಮದ ವೇದಿಕೆಯಲ್ಲಿ ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇದರ ವತಿಯಿಂದ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ನ ಈ ಯೋಜನೆಗೆ ರೂ. 7,000 ಧನ ಸಹಾಯ ಹಸ್ತಾಂತರ ಮಾಡಲಾಯಿತು.


ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಕಾಟೂರು ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ, ಕಾರ್ಯದರ್ಶಿ ಪ್ರವೀಣ ಕಾಟೂರು ಮತ್ತು ಚಿಣ್ಣರ ಕೂಟದ ಸಂಚಾಲಕ ಲಕ್ಷ್ಮಿನಾರಾಯಣ ಬೊಳುಬೈಲು ಇವರು ಟ್ರಸ್ಟ್ ನ ಅಧ್ಯಕ್ಷ ಡಾ. ಮನೋಜ್ ಕುಮಾರ್ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಎಸ್ ಆರ್ ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು