ಸಂಧ್ಯಾರಶ್ಮಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಸುಳ್ಯ ವತಿಯಿಂದ ಉಬರಡ್ಕ ಮಿತ್ತೂರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

0

ಸಂಧ್ಯಾರಶ್ಮಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ,ಸುಳ್ಯ,ಇದರ ವತಿಯಿಂದ ಶಾಲಾ ಪ್ರಾರಂಭೋತ್ಸವದ ದಿನ ಮೇ.31 ರಂದು ಸ. ಹಿ. ಪ್ರಾ. ಶಾಲೆ ಉಬರಡ್ಕ ಮಿತ್ತೂರು ಇಲ್ಲಿಗೆ ಭೇಟಿ ನೀಡಿ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ, ನಿರ್ದೇಶಕರುಗಳಾದ ಎಂ
ಸುಬ್ರಹ್ಮಣ್ಯ ಹೊಳ್ಳ, ಹಾಗೂ ಕೇಶವ ಮಾಸ್ಟರ್, ಸಂಘದ ಅಕೌಂಟೆಂಟ್ ಅನಿಲ್ ಕುಮಾರ್ ಉಪಸಿತರಿದ್ದರು.

ಸ್ಥಳೀಯ ಮುಖಂಡರಾದ ಶುಭಕರ ನಾಯಕ್, ರವಿರಾವ್ ಕಂಬಳಿಮೂಲೆ,ಸುರೇಶ್ ಅಮೈ ಮಡಪ್ಪಾಡಿ ಹಾಗೂ ಊರ ಮಹನೀಯರು ಸಹಕರಿಸಿದರು.