ನಾಡಿಗೆ ಬಂದ ಕಾಳಿಂಗ ಸರ್ಪ ಕಾಡಿಗೆ

0

ಐವರ್ನಾಡಿನ ಹಸಿಯಡ್ಕ ಸಮೀಪ ರಸ್ತೆ ಬದಿ ಇದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು.


ಕೇಶವ ಹಸಿಯಡ್ಕರವರ ಮನೆಯ ಗೇಟ್ ಸಮೀಪ ರಸ್ತೆ ಬದಿ ಕಾಳಿಂಗ ಸರ್ಪ ಇದ್ದದನ್ನು ಕಂಡು ಹಾವು ಹಿಡಿಯುವ ಮಾದೇಶ ಎಂಬವರಿಗೆ ಫೋನ್ ಮುಖಾಂತರ ತಿಳಿಸಲಾಯಿತು.


ಮಾದೇಶರವರು ಬಂದು ಕೇರೆ ಹಾವನ್ನು ನುಂಗುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿದು ದೂರದ ಕಾಡಿಗೆ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.