ಕೊಡಿಯಾಲಬೈಲು :ಸೇತುವೆ ಮೇಲೆ ತುಂಬಿ ನಿಂತ ಮಳೆ ನೀರು

0

ನೀರು ಇಳಿದು ಹೋಗಲು ವಿದ್ಯಾರ್ಥಿಗಳಿಂದ ಹರ ಸಾಹಸ

ನಿನ್ನೆ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕೊಡಿಯಾಲ ಬೈಲು ಸೇತುವೆ ಮೇಲೆ ಮಳೆ ನೀರು ತುಂಬಿ ಸಂಚರಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಸೇತುವೆಯ ಮೇಲಿನ ಮಣ್ಣು ಕಸ ಕಡ್ಡಿಗಳನ್ನು ತೆಗೆದು ನೀರು ಸರಾಗವಾಗಿ ಇಳಿದು ಹೋಗುವಂತೆ ಮಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು,ಸ್ಥಳೀಯ ಆಡಳಿತ ಮಾಡಬೇಕಾದ ಕೆಲಸ ಮಾಡಬೇಕಾಯಿತು.


ಮಳೆ ಸಂಧರ್ಭ ಇಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಹಲವಾರು ಭಾರಿ ವರದಿಗಳನ್ನು ಮಾಡಿ ಸಂಭಂದಪಟ್ಟ ಇಲಾಖೆಯನ್ನು ಎಚ್ಚರಿಸಲಾಗಿತ್ತು. ಆದರೆ ಇದಕ್ಕೆ ಸ್ಪಂದನೆ ಇಲ್ಲದೇ ಇದ್ದು ಇನ್ನಾದರೂ ನಗರ ಪಂಚಾಯತ್ ಇತ್ತ ಗಮನ ನೀಡ ಬೇಕಾಗಿದೆ.