ಕನಕಮಜಲು : ವಿದ್ಯುತ್ ಲೈನ್ ಗಳಿಗೆ ತಗಲುವ ಮರದ ರೆಂಬೆ ಕೊಂಬೆ ತೆರವು ಕಾರ್ಯ

0

ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ ) ಕನಕಮಜಲು ಹಾಗೂ ಮೆಸ್ಕಾಂ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಕನಕಮಜಲು ಗ್ರಾಮ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಲೈನ್ ಗಳಿಗೆ ತಗಲುವ ಮರದ ರೆಂಬೆ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಜೂ 9 ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ತಮ್ಮ ತಮ್ಮ ಮನೆ ಹಾಗೂ ವ್ಯಾಪ್ತಿಗೆ ಒಳಪಡುವ ವಿದ್ಯುತ್ ಲೈನ್ ಗೆ ತಗಲುವ ಮರದ ರೆಂಬೆಗಳನ್ನು ಕಡಿದು ಊರಿನ ಸಾರ್ವಜನಿಕರು ಸಹಕರಿಸಿದರು.

ಯುವಕ ಮಂಡಲ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಸ್ವಸ್ತಿಕ್ ಕುತ್ಯಾಳ, ಪೂರ್ವಧ್ಯಕ್ಷರುಗಳು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.