ಗಾಂಧಿನಗರ : ಸ್ಕೂಟಿ ವಾಹನಕ್ಕೆ ಲಾರಿ ಡಿಕ್ಕಿ, ತಪ್ಪಿದ ಅನಾಹುತ

0

ಸ್ಕೂಟಿ ಜಖಂ ಸವಾರ ಪಾರು

ಗಾಂಧಿನಗರ ಲಾರಿ ಮತ್ತು ಸ್ಕೂಟಿ ವಾಹನದ ನಡುವೆ ಡಿಕ್ಕಿ ಸಂಭವಿಸಿ, ಅದೃಷ್ಟವಶಾತ್ ಸ್ಕೂಟಿ ಸವಾರ ಅಪಾಯದಿಂದ ಅಲ್ಪದರಲ್ಲಿ ಪಾರಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಪೆರಾಜೆ ಕುಂಟಿಕಾನ ನಿವಾಸಿ ರಾಮಚಂದ್ರ ಎಂಬುವರು ಗಾಂಧಿನಗರದ ಬಳಿ ಏಕಾಏಕಿ ರಸ್ತೆಗೆ ತಮ್ಮ ವಾಹನವನ್ನು ತೆಗೆದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಚಾಲಕ ತಕ್ಷಣ ಬ್ರೇಕ್ ಹಾಕಿದ್ದು ಆದರೂ ನಿಯಂತ್ರಣ ಬಾರದೆ ಸ್ಕೂಟಿ ವಾಹನವನ್ನು ಅಲ್ಪ ದೂರ ಎಳೆದುಕೊಂಡು ಹೋಗಿದೆ. ಘಟನೆಯಿಂದ ಸ್ಕೂಟಿ ಅಲ್ಪಸ್ವಲ್ಪ ಜಖಂಗೊಂಡಿದ್ದು ಅದೃಷ್ಟವಶಾತ್ ಸವಾರ ಯಾವುದೇ ಗಾಯಗಳು ಸಂಭವಿಸದೆ ಪಾರಾಗಿದ್ದಾರೆ.